‘ಕರ್ನಾಟಕ-ಪ್ರಕೃತಿ ವಿಕೋಪಗಳು-ಆತಂಕಗಳು’

180.00

ಡಾ. ಅ. ನ. ಯಲಪ್ಪ ರೆಡ್ಡಿ
ನಿರೂಪಣೆ: ನಿರಂಜನ ಪರಾಂಜಪೆ

Category:

Description

‘ಅಭಿವೃದ್ಧಿ’ ಎಂಬ ಹೆಸರಿನಲ್ಲಿ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಖಾಸಗಿ ಕಂಪನಿಗಳಿಗೆ ಧಾರೆ ಎರೆದು ಕೊಡುವ ಆಳುವ ಸರ್ಕಾರಗಳು. ಅರಣ್ಯ ಸಂಪತ್ತನ್ನಷ್ಟೇ ಅಲ್ಲ ಅರಣ್ಯ ಭೂಮಿಯನ್ನು ಖಾಸಗಿ ಕಂಪನಿಗಳಿಗೆ ಬಿಟ್ಟು ಕೊಡುತ್ತಿವೆ. ಹೀಗಾಗಿಯೇ ಜನ ಜೀವನವಷ್ಟೇ ಅಲ್ಲ, ಜೀವ ವೈವಿದ್ಯವೂ ನಾಶವಾಗುವ ಅಂಚಿನಲ್ಲಿದ್ದೇವೆ. ಹೀಗಾಗಿಯೇ ಪ್ರಕೃತಿ ವೈಪರಿತ್ಯಗಳಾಗಿ ಜನ ಜೀವನ ಸೇರಿದಂತೆ ಜೀವ ಜೀವಗಳ ಸಂಕಲನಗಳನ್ನೇ ಕಳೆದುಕೊಳ್ಳುತ್ತಿದ್ದೇವೆ. ಇಂತಹ ಆಪತ್ತುಗಳು ದಿನೇ ದಿನೇ ಒಂದಲ್ಲ ಒಂದು ಸ್ವರೂಪದಲ್ಲಿ ಅಪ್ಪಳಿಸುತ್ತಲೇ ಇವೆ. ಈ ರೀತಿಯ ಗಂಭೀರ ಪರಿಸ್ಥಿತಿಗಳು ನಮ್ಮೆದುರಾಗುತ್ತಿದ್ದರೂ ಆಳುವ ವರ್ಗ ಮತ್ತು ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಲಾಭಕೋರತನವನ್ನು ಬಿಡುತ್ತಿಲ್ಲ. ಇಂತಹ ಪರಿಸ್ಥತಿಯಲ್ಲಿರುವಾಗ ನಾಗರೀಕ ಸಮಾಜ ಎಚ್ಚೆತ್ತುಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆ ಮಾಡಿಕೊಳ್ಳಬೇಕಾದದ್ದು ನಾಗರೀಕರಾದ ನಮ್ಮೆಲ್ಲರ ಹೊಣೆಯಾಗಿದೆ.