Description
‘ಉರಿಮಳೆ’ ಎಂಬದು ಕವನ ಸಂಕಲನ. ಪಾವಗಡವೆಂಬ ಹಳ್ಳಿಯಿಂದ ಬಂದವರಾದ ಗೋವಿಂದಪ್ಪ ಅವರು ಸಹಜವಾಗಿಯೇ ಹಳ್ಳಿ ಬದುಕಿನ ಗಮಲನ್ನು ತಮ್ಮ ಕಾವ್ಯದ ವಸ್ತುವನ್ನಾಗಿ ಪರಿಭಾವಿಸಿಕೊಂಡು ಅಭಿವ್ಯಕ್ತಿಸಿರುವುದು ಕಂಡುಬರುತ್ತದೆ. ಇವರ ಒಟ್ಟು ಕಾವ್ಯದ ಸ್ಥಾಯಿ ಭಾವವೇ ಶ್ರಮಜೀವಿಗಳ ಪರ, ಅಸಮಾನತೆಯ ವಿರುದ್ಧದ ಪ್ರತಿಭಟಿಸುವ ದನಿ, ಕೊಳ್ಳುಬಾಕ ಸಂಸ್ಕೃತಿಯಿಂದುಂಟಾಗುತ್ತಿರುವ ಪರಿಣಾಮಗಳ ಬಗೆಗಿನ ಎಚ್ಚರ, ಸಾಮಾಜಿಕ, ಆರ್ಥಿಕ, ರಾಜಕೀಯ ಪ್ರಕ್ಷಬ್ದತೆಯ ವಿರುದ್ಧ ಪ್ರತಿರೋಧಿಸುವ ಮನೋಭೂಮಿಕೆ, ಮನುಷ್ಯ ಪ್ರೇಮದ ಸದಾಶಯ ಇವಲ್ಲವೂ ಗೋವಿಂದಪ್ಪ ಅವರ ಕಾವ್ಯದಲ್ಲಿ ಅಭಿವ್ಯಕ್ತಗೊಂಡಿದೆ. ವಿಶೇಷವಾಗಿ ದುಡಿವ ವರ್ಗದ ಜನರ ಕಾಳಜಿಯು ಗಮನೀಯವಾದುದು.